Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Corporate sports

 ಮಿಡ್‌ನೈಟ್ ಮ್ಯಾರಥಾನ್: ನರೇಶ್, ಬಿಜೋಯ್‌ಗೆ ಪ್ರಶಸ್ತಿ ಗರಿ

ಬೆಂಗಳೂರು: ಸಿಲಿಕಾನ್ ಸಿಟಿಯ ಚುಮು ಚುಮು ಚಳಿಯನ್ನೂ ಲೆಕ್ಕಿಸದೆ ಸಾವಿರಾರು ಕ್ರೀಡಾಪಟುಗಳು ಉತ್ಸಾಹದಿಂದ ಭಾಗವಹಿಸುವ ಮೂಲಕ 18ನೇ ಆವೃತ್ತಿಯ ‘ಫೋನ್ ಪೇ ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್’ (ಬಿಎಂಎಂ) ಅನ್ನು ಯಶಸ್ವಿಗೊಳಿಸಿದ್ದಾರೆ. ಶನಿವಾರ (ಡಿ.6) ರಾತ್ರಿ ವೈಟ್‌ಫೀಲ್ಡ್‌ನ ಕೆಟಿಪಿಒ ಆವರಣದಲ್ಲಿ ನಡೆದ ಈ ಮ್ಯಾರಥಾನ್‌ ಹಬ್ಬಕ್ಕೆ ಸುಮಾರು 10,000ಕ್ಕೂ ಹೆಚ್ಚು ಓಟಗಾರರು ಸಾಕ್ಷಿಯಾದರು. Bengaluru Midnight Marathon: Naresh Thapa, Bijoya Burman ARE are champions ಈ ಬಾರಿಯ ಮ್ಯಾರಥಾನ್ ಅನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಲಾಗಿತ್ತು. ಇದಕ್ಕೆ ಸಾಕ್ಷಿ ಎಂಬಂತೆ, ಸಶಸ್ತ್ರ ಪಡೆಗಳಿಂದ 900ಕ್ಕೂ ಹೆಚ್ಚು ಯೋಧರು ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರ (SAI) ದಿಂದ ನೂರಾರು ಕ್ರೀಡಾಪಟುಗಳು ಭಾಗವಹಿಸಿದ್ದರು. ಫಲಿತಾಂಶದ ಮುಖ್ಯಾಂಶಗಳು:  ಭಾರತೀಯ ನೌಕಾಪಡೆಯ ನರೇಶ್ ಥಾಪಾ ಅವರು ಪುರುಷರ ವಿಭಾಗದ ‘ಫುಲ್ ಮ್ಯಾರಥಾನ್’ (Full Marathon) ನಲ್ಲಿ 3 ಗಂಟೆ 41 ನಿಮಿಷ 08 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಇತ್ತ ಮಹಿಳೆಯರ ವಿಭಾಗದಲ್ಲಿ ಬಿಜೋಯ ಬರ್ಮನ್ ಅವರು 3 ಗಂಟೆ 35 ನಿಮಿಷ 34 ಸೆಕೆಂಡುಗಳಲ್ಲಿ ಗುರಿ ತಲುಪಿ ಪ್ರಶಸ್ತಿ ಬಾಚಿಕೊಂಡರು. ಹಾಫ್ ಮ್ಯಾರಥಾನ್ ವಿಭಾಗದಲ್ಲಿ ಭಾರತೀಯ ಸೇನೆಯ ಶಿವಂ ಸಿಂಗ್ ತೋಮರ್ (1:06:33) ಮತ್ತು ಅಮಿತ್ ಸಿಂಗ್ (1:06:34) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದುಕೊಂಡರು. ಮಹಿಳೆಯರ ಹಾಫ್ ಮ್ಯಾರಥಾನ್‌ನಲ್ಲಿ ನೀತು ಕುಮಾರಿ (1:23:03) ಪ್ರಥಮ ಸ್ಥಾನ ಪಡೆದರು. ಸಂಭ್ರಮದ ರಾತ್ರಿ: ರೋಟರಿ ಬೆಂಗಳೂರು ಐಟಿ ಕಾರಿಡಾರ್ (RBITC) ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಕೇವಲ ಓಟವಷ್ಟೇ ಅಲ್ಲದೆ, ಡೊಳ್ಳು ಕುಣಿತ, ಲೈವ್ ಮ್ಯೂಸಿಕ್ ಬ್ಯಾಂಡ್‌ಗಳು ಮತ್ತು ರೋಬೋಟ್ ಪ್ರದರ್ಶನಗಳು ಕ್ರೀಡಾಪಟುಗಳನ್ನು ರಂಜಿಸಿದವು. ಅಂಗವಿಕಲರಿಗೆ ಮೀಸಲಾದ ‘ಮೋಟಿವೇಶನ್ ಇಂಡಿಯಾ’ ಸಂಸ್ಥೆಯ 50ಕ್ಕೂ ಹೆಚ್ಚು ವಿಶೇಷ ಚೇತನರು ವ್ಹೀಲ್‌ಚೇರ್‌ಗಳ ಮೂಲಕ 5ಕೆ ಫನ್ ರನ್‌ನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿದ ಮಹದೇವಪುರ ಶಾಸಕಿ ಮಂಜುಳಾ ಲಿಂಬಾವಳಿ ಮತ್ತು ಮೇಜರ್ ಜನರಲ್ ವಿ.ಟಿ. ಮ್ಯಾಥ್ಯೂ ಅವರು ಕ್ರೀಡಾಪಟುಗಳ ಉತ್ಸಾಹವನ್ನು ಶ್ಲಾಘಿಸಿದರು. ಪ್ರಮುಖ ವಿಜೇತರ ಪಟ್ಟಿ: *   ಫುಲ್ ಮ್ಯಾರಥಾನ್ (ಪುರುಷರು): ನರೇಶ್ ಥಾಪಾ (ಚಿನ್ನ), ನವೀನ್ ಕುಮಾರ್ (ಬೆಳ್ಳಿ). *   ಫುಲ್ ಮ್ಯಾರಥಾನ್ (ಮಹಿಳೆಯರು): ಬಿಜೋಯ ಬರ್ಮನ್ (ಚಿನ್ನ), ಕೃಷ್ಣ ಕೊಹ್ಲಿ (ಬೆಳ್ಳಿ). *  

Corporate sports

ಅಲೆಪ್ಪಿ ಕಪ್ ಅಖಿಲ ಭಾರತ ಟಿ20 ಟೂರ್ನಿ: ವಿಜಯಾ ಬ್ಯಾಂಕ್ ಚಾಂಪಿಯನ್

ಬೆಂಗಳೂರು: ಕರ್ನಾಟಕ ತಂಡದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಿ.ಎಂ ಗೌತಮ್ ಅವರನ್ನೊಳಗೊಂಡ ವಿಜಯಾ ಬ್ಯಾಂಕ್ ತಂಡ, ಅಲೆಪ್ಪಿ ಕಪ್ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. ಕಳೆದ ವಾರ ಕೇರಳದ ಪ್ರವಾಸಿ ತಾಣ ಅಲೆಪ್ಪಿಯಲ್ಲಿ ನಡೆದ

Corporate sports

ಮಗಳ ಹೆಸರಿನಲ್ಲಿ ಕ್ರಿಕೆಟ್ ಅಕಾಡೆಮಿ ಆರಂಭಿಸಿದ ಮಾಜಿ ಕ್ರಿಕೆಟಿಗ ಸೋಮಶೇಖರ್ ಶಿರಗುಪ್ಪಿ

ಹುಬ್ಬಳ್ಳಿ: ಕರ್ನಾಟಕ ಕ್ರಿಕೆಟ್‌ನಲ್ಲಿ ಸೋಮಶೇಖರ್ ಅವರದ್ದು ದೊಡ್ಡ ಹೆಸರು. 90ರ ದಶಕದಲ್ಲಿ ರಣಜಿ ಟ್ರೋಫಿ ವಿಜೇತ ಕರ್ನಾಟಕ ತಂಡದ ಸದಸ್ಯರಾಗಿದ್ದ ಶಿರಗುಪ್ಪಿ, ಕರ್ನಾಟಕ ಕಂಡ ಶ್ರೇಷ್ಠ ವಿಕೆಟ್ ಕೀಪರ್‌ಗಳಲ್ಲಿ ಒಬ್ಬರು. ಆಟಕ್ಕೆ ಗುಡ್‌ಬೈ ಹೇಳಿದ ನಂತರ

Corporate sports

ಕೆಎಸ್‌ಸಿಎ ಕ್ರಿಕೆಟ್: ಮೈಸೂರಿನ ಎನ್‌ಆರ್ ಸ್ಪೋರ್ಟ್ಸ್ ಗ್ರೂಪ್ ತಂಡ ಚಾಂಪಿಯನ್ ಬೆಂಗಳೂರು: ಮೈಸೂರಿನ ಎನ್‌ಆರ್ ಸ್ಪೋರ್ಟ್ಸ್ ಗ್ರೂಪ್ ತಂಡ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಯ ಗ್ರೂಪ್ 2, ಡಿವಿಜನ್ 2 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ.

Corporate sports

ಕೆಎಸ್‌ಸಿಎ ಕ್ರಿಕೆಟ್: ಇಂಡಿಯಾ ಬುಲ್ಸ್‌ಗೆ ಭರ್ಜರಿ ಜಯ

ಬೆಂಗಳೂರು: ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅಬ್ಬರಿಸಿದ ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ತಂಡ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಯ ಆಶ್ರಯದಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ಗ್ರೂಪ್ 2, ಡಿವಿಜನ್ 2 ಟೂರ್ನಿ ಪಂದ್ಯದಲ್ಲಿ ಇಎಸ್‌ಪಿಎನ್

Corporate sports

ಕತಾರ್‌ನಲ್ಲಿ ಕ್ರಿಕೆಟ್ ಬೆಳಗಿದ ಕನ್ನಡಿಗರು

ಬೆಂಗಳೂರು: ಬದುಕನರಸಿ ಕತಾರ್‌ಗೆ ತೆರಳಿದ್ದ ಕುಂದಗನ್ನಡಿಗರ ತಂಡವೊಂದು ಅಲ್ಲಿ ಕ್ರಿಕೆಟ್ ಕ್ಲಬ್‌ವೊಂದನ್ನು ಕಟ್ಟಿ, ಸ್ಥಳೀಯರಲ್ಲಿ ಕ್ರಿಕೆಟ್ ಬಗ್ಗೆ ಆಸಕ್ತಿ ಮೂಡಿಸಿದ್ದಾರೆ. ಅಲ್ಲದೆ ಕಳೆದ ಎರಡು ವರ್ಷಗಳಿಂದ ಕ್ರಿಕೆಟ್ ಹಬ್ಬ ಆಚರಿಸಿ ಸ್ಥಳೀಯರ ಪ್ರೀತಿಗೆ ಪಾತ್ರರಾಗಿದ್ದಾರೆ.