Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Articles By This Author

Hockey

ವಿಶ್ವಕಪ್‌ ಹಾಕಿ: ಸೋಲಂಚಿನಲಿ ಗೋಲ್ಮಿಂಚು ಭಾರತಕ್ಕೆ ಕಂಚು

ಚೆನ್ನೈ: ಅರ್ಜೆಂಟೀನಾ ವಿರುದ್ಧ 4-2 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಭಾರತ ಹಾಕಿ ತಂಡ ಜೂನಿಯರ್‌ ವಿಶ್ವಕಪ್‌ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದಿದೆ. ಈ ಹಿಂದೆ ಎರಡು ಬಾರಿ ನಾಲ್ಕನೇ ಸ್ಥಾನಕ್ಕೆ

Cycling

ಚಂದರಗಿ ಕ್ರೀಡಾ ಶಾಲೆಗೆ ಕೀರ್ತಿ ತಂದ ಹೊನ್ನಪ್ಪ ಧರ್ಮಟ್ಟಿ

ಚಂದರಗಿ: ಇತ್ತೀಚೆಗೆ ಒಡಿಶಾದಲ್ಲಿ ನಡೆದ 30ನೇ ರಾಷ್ಟ್ರೀಯ ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳಗಾವಿಯ ಚಂದರಗಿ ಕ್ರೀಡಾ ಶಾಲೆಯ ವಿದ್ಯಾರ್ಥಿ ಹೊನ್ನಪ್ಪ ಚಿದಾನಂದ ಧರ್ಮಟ್ಟಿ ಬೆಳ್ಳಿ ಪದಕ ಗೆದ್ದು ಶಾಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

Cricket

ಕೆಎಸ್‌ಸಿಎ ಚುನಾವಣೆ: ವೆಂಕಿ ಪಡೆಗೆ ಜಯಭೇರಿ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಭಾರತ ಕ್ರಿಕೆಟ್‌ ತಂಡದ ಮಾಜಿ ವೇಗದ ಬೌಲರ್‌ ವೆಂಕಟೇಶ್‌ ಪ್ರಸಾದ್‌ ಅವರ ತಂಡ ಜಯ ಗಳಿಸಿದ್ದು, ತಾವು “ಗೇಮ್‌ ಚೇಂಜರ್‌” ಎಂಬುದನ್ನು ಸಾಬೀತುಪಡಿಸಿದ್ದಾರೆ. Venkatesh

School games

ಕ್ರೀಡಾ ಸಾಧನೆಗಾಗಿ SPOCO ಹೊಸ ಯೋಜನೆ: ಮೃಣಾಲಿನಿ ಪಟ್ಟಣ್‌

ಬೆಳಗಾವಿ: ಕಳೆದ ನಾಲ್ಕು ದಶಕಗಳಿಂದ ಶಿಕ್ಷಣದ ಜೊತೆಗೆ ಕ್ರೀಡೆಯನ್ನೂ ಪೋಷಿಸುತ್ತ ಬಂದಿರುವ, ದೇಶದ ಮೊದಲ ಕ್ರೀಡಾ ಶಾಲೆ ಚಂದರಗಿ ಕ್ರೀಡಾ ಶಾಲೆಯು ಕ್ರೀಡಾಭಿವೃದ್ಧಿಗಾಗಿ ಅನೇಕ ವಿನೂತನ ಯೋಜನೆಗಳನ್ನು ರೂಪಿಸಿದೆ ಎಂದು ಎಸ್‌.ಎಂ. ಕಲೂತಿ ಸಂಯಕ್ತ

Corporate sports

 ಮಿಡ್‌ನೈಟ್ ಮ್ಯಾರಥಾನ್: ನರೇಶ್, ಬಿಜೋಯ್‌ಗೆ ಪ್ರಶಸ್ತಿ ಗರಿ

ಬೆಂಗಳೂರು: ಸಿಲಿಕಾನ್ ಸಿಟಿಯ ಚುಮು ಚುಮು ಚಳಿಯನ್ನೂ ಲೆಕ್ಕಿಸದೆ ಸಾವಿರಾರು ಕ್ರೀಡಾಪಟುಗಳು ಉತ್ಸಾಹದಿಂದ ಭಾಗವಹಿಸುವ ಮೂಲಕ 18ನೇ ಆವೃತ್ತಿಯ ‘ಫೋನ್ ಪೇ ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್’ (ಬಿಎಂಎಂ) ಅನ್ನು ಯಶಸ್ವಿಗೊಳಿಸಿದ್ದಾರೆ. ಶನಿವಾರ (ಡಿ.6) ರಾತ್ರಿ ವೈಟ್‌ಫೀಲ್ಡ್‌ನ ಕೆಟಿಪಿಒ ಆವರಣದಲ್ಲಿ ನಡೆದ ಈ ಮ್ಯಾರಥಾನ್‌ ಹಬ್ಬಕ್ಕೆ ಸುಮಾರು 10,000ಕ್ಕೂ ಹೆಚ್ಚು ಓಟಗಾರರು ಸಾಕ್ಷಿಯಾದರು. Bengaluru Midnight Marathon: Naresh Thapa, Bijoya Burman ARE are champions ಈ ಬಾರಿಯ ಮ್ಯಾರಥಾನ್ ಅನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಲಾಗಿತ್ತು. ಇದಕ್ಕೆ ಸಾಕ್ಷಿ ಎಂಬಂತೆ, ಸಶಸ್ತ್ರ ಪಡೆಗಳಿಂದ 900ಕ್ಕೂ ಹೆಚ್ಚು ಯೋಧರು ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರ (SAI) ದಿಂದ ನೂರಾರು ಕ್ರೀಡಾಪಟುಗಳು ಭಾಗವಹಿಸಿದ್ದರು. ಫಲಿತಾಂಶದ ಮುಖ್ಯಾಂಶಗಳು:  ಭಾರತೀಯ ನೌಕಾಪಡೆಯ ನರೇಶ್ ಥಾಪಾ ಅವರು ಪುರುಷರ ವಿಭಾಗದ ‘ಫುಲ್ ಮ್ಯಾರಥಾನ್’ (Full Marathon) ನಲ್ಲಿ 3 ಗಂಟೆ 41 ನಿಮಿಷ 08 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಇತ್ತ ಮಹಿಳೆಯರ ವಿಭಾಗದಲ್ಲಿ ಬಿಜೋಯ ಬರ್ಮನ್ ಅವರು 3 ಗಂಟೆ 35 ನಿಮಿಷ 34 ಸೆಕೆಂಡುಗಳಲ್ಲಿ ಗುರಿ ತಲುಪಿ ಪ್ರಶಸ್ತಿ ಬಾಚಿಕೊಂಡರು. ಹಾಫ್ ಮ್ಯಾರಥಾನ್ ವಿಭಾಗದಲ್ಲಿ ಭಾರತೀಯ ಸೇನೆಯ ಶಿವಂ ಸಿಂಗ್ ತೋಮರ್ (1:06:33) ಮತ್ತು ಅಮಿತ್ ಸಿಂಗ್ (1:06:34) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದುಕೊಂಡರು. ಮಹಿಳೆಯರ ಹಾಫ್ ಮ್ಯಾರಥಾನ್‌ನಲ್ಲಿ ನೀತು ಕುಮಾರಿ (1:23:03) ಪ್ರಥಮ ಸ್ಥಾನ ಪಡೆದರು. ಸಂಭ್ರಮದ ರಾತ್ರಿ: ರೋಟರಿ ಬೆಂಗಳೂರು ಐಟಿ ಕಾರಿಡಾರ್ (RBITC) ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಕೇವಲ ಓಟವಷ್ಟೇ ಅಲ್ಲದೆ, ಡೊಳ್ಳು ಕುಣಿತ, ಲೈವ್ ಮ್ಯೂಸಿಕ್ ಬ್ಯಾಂಡ್‌ಗಳು ಮತ್ತು ರೋಬೋಟ್ ಪ್ರದರ್ಶನಗಳು ಕ್ರೀಡಾಪಟುಗಳನ್ನು ರಂಜಿಸಿದವು. ಅಂಗವಿಕಲರಿಗೆ ಮೀಸಲಾದ ‘ಮೋಟಿವೇಶನ್ ಇಂಡಿಯಾ’ ಸಂಸ್ಥೆಯ 50ಕ್ಕೂ ಹೆಚ್ಚು ವಿಶೇಷ ಚೇತನರು ವ್ಹೀಲ್‌ಚೇರ್‌ಗಳ ಮೂಲಕ 5ಕೆ ಫನ್ ರನ್‌ನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿದ ಮಹದೇವಪುರ ಶಾಸಕಿ ಮಂಜುಳಾ ಲಿಂಬಾವಳಿ ಮತ್ತು ಮೇಜರ್ ಜನರಲ್ ವಿ.ಟಿ. ಮ್ಯಾಥ್ಯೂ ಅವರು ಕ್ರೀಡಾಪಟುಗಳ ಉತ್ಸಾಹವನ್ನು ಶ್ಲಾಘಿಸಿದರು. ಪ್ರಮುಖ ವಿಜೇತರ ಪಟ್ಟಿ: *   ಫುಲ್ ಮ್ಯಾರಥಾನ್ (ಪುರುಷರು): ನರೇಶ್ ಥಾಪಾ (ಚಿನ್ನ), ನವೀನ್ ಕುಮಾರ್ (ಬೆಳ್ಳಿ). *   ಫುಲ್ ಮ್ಯಾರಥಾನ್ (ಮಹಿಳೆಯರು): ಬಿಜೋಯ ಬರ್ಮನ್ (ಚಿನ್ನ), ಕೃಷ್ಣ ಕೊಹ್ಲಿ (ಬೆಳ್ಳಿ). *  

Hockey

ಹಾಕಿ: ಪೆನಾಲ್ಟಿ ಶೂಟೌಟ್‌ ಮೂಲಕ ಸೆಮಿಫೈನಲ್‌ ತಲುಪಿದ ಭಾರತ

ಚೆನ್ನೈ; ಬೆಲ್ಜಿಯಂ ಅತ್ಯಂತ ರೋಚಕವಾಗಿ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 4-3 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಭಾರತ ತಂಡ ಜೂನಿಯರ್‌ ವಿಶ್ವಕಪ್‌ ಹಾಕಿ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ ಪ್ರವೇಶಿಸಿದೆ. ನಿಗದಿತ ಅವಧಿಯಲ್ಲಿ ಇತ್ತಂಡಗಳು 2-2

Kambala

ಡಿ. 10ರಂದು ತಗ್ಗರ್ಸೆ ಸಾಂಪ್ರದಾಯಿಕ ಕಂಬಳೋತ್ಸವ

Sportsmail: ಪ್ರತಿ ವರ್ಷದಂತೆ ನಡೆಯುತ್ತಿರುವ ತಗ್ಗರ್ಸೆ ಸಾಂಪ್ರದಾಯಿಕ ಕಂಬಳ ಇದೇ ತಿಂಗಳ 10 ಬುಧವಾರದಂದು ಬೆಳಿಗ್ಗೆ 11:42 ರಿಂದ ಸಂಜೆ 5 ಗಂಟೆಯವರೆಗೆ ತಗ್ಗರ್ಸೆ ಹೆಗ್ಡೆಯವರ ಮನೆಯ ಕಂಬಳ ಗದ್ದೆಯಲ್ಲಿ ನಡೆಯಲಿದೆ ಎಂದು ತಗ್ಗರ್ಸೆ

Adventure Sports

ಮಂಗಳೂರಿನಿಂದ ಟೂರ್ ಆಫ್ ನೀಲಗಿರೀಸ್ ಸೈಕಲ್ ಯಾತ್ರೆ

ಮಂಗಳೂರು: ಭಾರತದ ಅತಿದೊಡ್ಡ ಮತ್ತು ಅತ್ಯಂತ ಜನಪ್ರಿಯ ಸೈಕಲ್ ಪ್ರವಾಸವಾದ ಟೂರ್ ಆಫ್ ನೀಲಗಿರೀಸ್‌ನ 16ನೇ ಆವೃತ್ತಿ ಈ ಬಾರಿ ಮಂಗಳೂರಿನಿಂದ ಆರಂಭವಾಗಲಿದೆ. ಡಿಸೆಂಬರ್ 14 ರಿಂದ 20ರವರೆಗೆ ನಡೆಯುವ ಈ ಯಾತ್ರೆಯಲ್ಲಿ 110

Khelo India University Games

KIUG2025: ಪದಕ ಗಳಿಕೆಯಲ್ಲಿ ಅಗ್ರ ಸ್ಥಾನಕ್ಕೇರಿದ ಗುರುನಾನಕ್‌

ಜೈಪುರ: ಇಲ್ಲಿನ ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣ ಸೇರಿದಂತೆ ರಾಜಸ್ಥಾನದ ವಿವಿಧ ಕ್ರೀಡಾಂಗಣಗಳಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನ ಪದಕ ಗಳಿಕೆಯಲ್ಲಿ ಅಮೃತಸರದ ಗುರು ನಾನಕ್‌ ದೇವ್‌ ವಿಶ್ವವಿದ್ಯಾನಿಲಯ ಅಗ್ರ ಸ್ಥಾನಕ್ಕೇರಿದೆ. Gur Nnanak

Khelo India University Games

KIUG2025: ಸಿದ್ಧಿ ಸಮುದಾಯಕ್ಕೆ ಕೀರ್ತಿ ತಂದ ಶಾಲಿನ ಸಯರ್‌ ಸಿದ್ಧಿ

Sportsmail, ಜೈಪುರ: ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಸಿದ್ಧಿ ಸಮುದಾಯ ಕುಸ್ತಿಪಟು ಶಾಲಿನ ಸಯರ್‌ ಸಿದ್ಧಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದು ಕರ್ನಾಟಕ ರಾಜ್ಯ, ಕರ್ನಾಟಕ ವಿಶ್ವನಿದ್ಯಾನಿಲಯ