Friday, March 29, 2024

ಮಿಂಚಿದ ಕರುಣ್, ಮನೀಶ್: ರಣಜಿ ಸೆಮಿಫೈನಲ್‌ಗೆ ಕರ್ನಾಟಕ

ಸ್ಪೋರ್ಟ್ಸ್ ಮೇಲ್ ವರದಿ

ರಾಜಸ್ಥಾನ ತಂಡಕ್ಕೆ 6 ವಿಕೆಟ್‌ಗಳ ಸೋಲುಣಿಸಿದ ಕರ್ನಾಟಕ ರಣಜಿ ಟ್ರೋಫಿಯ ಸೆಮಿಫೈನಲ್ ತಲುಪಿದೆ. ಕರುಣ್ ನಾಯರ್ (61*) ಹಾಗೂ  ನಾಯಕ ಮನೀಶ್ ಪಾಂಡೆ  (87 * ) ಅವರ ಆಕರ್ಷಕ ಅರ್ಧ ಶತಕಗಳ ನೆರವಿನಿಂದ ಕರ್ನಾಟಕ ತಂಡ ಜಯದ ಗುರಿಯನ್ನು ಯಾವುದೇ ಆತಂಕ ಅನುಭವಿಸದೆ ತಲುಪಿತು.

ಅಂತಿಮ ದಿನದಲ್ಲಿ ಕರ್ನಾಟಕಕ್ಕೆ ಗೆಲ್ಲಲು 139 ರನ್‌ಗಳ ಅಗತ್ಯವಿದ್ದಿತ್ತು.  184 ರನ್ ಜಯದ ಗುರಿ ಹೊತ್ತ ಕರ್ನಾಟಕ ಮೂರನೇ ದಿನದಲ್ಲಿ 45 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತ್ತು. ನಾಲ್ಕನೇ ದಿನದಲ್ಲಿ  ರೋನಿತ್ ಮೋರೆ ಅವರ ವಿಕೆಟ್ ಗಳಿಸುವಲ್ಲಿ ಮಾತ್ರ ರಾಜಸ್ಥಾನ ಯಶಸ್ಸು ಕಂಡಿತ್ತು. ಇದುವರೆಗೂ ಉತ್ತಮ ಪ್ರದರ್ಶನ ತೋರುವಲ್ಲಿ ವಿಲರಾಗಿದ್ದ ಕರುಣ್ ನಾಯರ್ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. 129 ಎಸೆತಗಳನ್ನೆದುರಿಸಿದ ನಾಯರ್6 ಬೌಂಡರಿ ನೆರವಿನಿಂದ ಅಜೇಯ 61 ರನ್ ಗಳಿಸಿದರು. ಮನೀಶ್ ಪಾಂಡೆ ನಾಯಕನ ಜವಾಬ್ದಾರಿಯ ಆಟ ಪ್ರದರ್ಶಿಸಿ ಕೇವಲ 75 ಎಸೆತಗಳಲ್ಲಿ 14 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ ಅಮೂಲ್ಯ ಜಯ ತಂದಿತ್ತರು. ಮೊದಲ ಇನಿಂಗ್ಸ್‌ನಲ್ಲಿ ಅಜೇಯ 83ರನ್ ಗಳಿಸಿದ್ದ ವಿನಯ್ ಕುಮಾರ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Related Articles