Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಜ. 8ರಂದು ಪಡುಬಿದ್ರಿಯಲ್ಲಿ ಸೌಹಾರ್ಧ ಟ್ರೋಫಿ ಕ್ರಿಕೆಟ್‌ ಟೂರ್ನಿ

sportsmail 

ಕ್ರೀಡೆ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮ ಪಡಿಸಬೇಕು, ಕ್ರೀಡೆ ನಮ್ಮ ನಡುವಿನ ಸೌಹಾರ್ಧತೆಯನ್ನು ಕಾಪಾಡಬೇಕು, ಕ್ರೀಡೆ ನಮ್ಮ ನಡುವಿನ ವೈರತ್ವನ್ನು ದೂರ ಮಾಡಬೇಕು. ಈ ಮೌಲ್ಯಗಳನ್ನೇ ಆದರ್ಶವಾಗಿಟ್ಟುಕೊಂಡು ಪಡುಬಿದ್ರಿಯ ರಿಯಾಜ್‌ ಪಡುಬಿದ್ರಿ, ವರುಣ್‌ ಪಡುಬಿದ್ರಿ ಹಾಗೂ ನೊಜನ್‌ ಅವರು 08-1-2022ರಂದು ಆರ್‌.ವಿ.ಎನ್‌. ಕ್ರಿಕೆಟರ್ಸ್‌ ವತಿಯಿಂದ ಉಡುಪಿ ಜಿಲ್ಲೆಯ ಪಡುಬಿದ್ರಿಯ ಅಬ್ಬಾಸ್‌ಗುಡ್ಡೆ ಅಂಗಣದಲ್ಲಿ ಉಡುಪಿ ಜಿಲ್ಲಾ ಮಟ್ಟದ ಸೌಹಾರ್ಧ ಟ್ರೋಫಿ ಹೊನಲು ಬೆಳಕಿನ ಕ್ರಿಕೆಟ್‌ ಟೂರ್ನಿಯನ್ನು ಆಯೋಜಿಸಿದ್ದಾರೆ. ಜನವರಿ 1ರಂದು ನಡೆಯಬೇಕಾಗಿದ್ದ ಟೂರ್ನಿಯನ್ನು ನೈಟ್‌ ಕರ್ಫ್ಯೂ ಕಾರಣ 8ಕ್ಕೆ ಮುಂದೂಡಲಾಗಿದೆ.

40 ಗಜಗಳ ಈ ಟೂರ್ನಿಯಲ್ಲಿ ಸುಮಾರು 25ಕ್ಕೂ ಹೆಚ್ಚು ತಂಡಗಳು ಪಾಲ್ಗೊಳ್ಳುವ ಸಾಧ್ಯತೆ ಇದ್ದು, ಪ್ರವೇಶ ಶುಲ್ಕ ರೂ. 2,000 ಆಗಿರುತ್ತದೆ. ಒಂದೇ ದಿನದಲ್ಲಿ ಪಂದ್ಯಗಳನ್ನು ಮುಗಿಸುವ ಉದ್ದೇಶ ಇರುವುದರಿಂದ 4 ಓವರ್‌ಗಳ ಪಂದ್ಯವಾಗಿರುತ್ತದೆ. ಮೊದಲ ಬಹುಮಾನ 22,222 ರೂ. ಹಾಗೂ ದ್ವಿತೀಯ ಬಹುಮಾನ ರೂ. 11,111 ಆಗಿರುತ್ತದೆ. ನಗದು ಬಹುಮಾನದ ಜತೆಯಲ್ಲಿ ಆಕರ್ಷಕ ಟ್ರೋಫಿಯೂ ಇರುತ್ತದೆ.

ಟೆನಿಸ್‌ ಬಾಲ್‌ ಕ್ರಿಕೆಟ್‌ಗೆ ಪಡುಬಿದ್ರಿಯ ಪಡುಬಿದ್ರಿ ಫ್ರೆಂಡ್ಸ್‌ ಅಪಾರ ಕೊಡುಗೆ ನೀಡಿದೆ. ತಂಡದ ಹಿರಿಯ ಆಟಗಾರ ಶರತ್‌ ಶೆಟ್ಟಿ ಅವರು ಈಗಲೂ ಟೆನಿಸ್‌ ಬಾಲ್‌ ಕ್ರಿಕೆಟ್‌ಗೆ ತನ್ನದೇ ಆದ ಕೊಡುಗೆ ನೀಡುತ್ತಿದ್ದಾರೆ. ಈ ಕ್ಲಬ್‌ನಲ್ಲಿ ಆಡಿರುವ ರಿಯಾಜ್‌ ಪಡುಬಿದ್ರಿ ಉತ್ತಮ ಆಟಗಾರರಾಗಿದ್ದು, ಸಾಗರ್‌ ಕುಕ್ಕಿಕಟ್ಟೆ ತಂಡದಲ್ಲೂ ಆಡಿದ ಆಟಗಾರ. ದುಬೈಯಲ್ಲಿ ಉದ್ಯೋಗದಲ್ಲಿದ್ದು ಊರಿಗೆ ಬಂದಾಗಲೆಲ್ಲ ಈ ಟೂರ್ನಿಯನ್ನು ಆಯೋಜಿಸುತ್ತಿದ್ದಾರೆ.

ಹೆಚ್ಚಿನ ವಿವರಗಳಿಗೆ 9880341984, 9740242664 ದೂರವಾಣಿಯನ್ನು ಸಂಪರ್ಕಿಸಬಹುದು.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.