Thursday, April 18, 2024

ಚಾಲೆಂಜ್ ತಂಡಕ್ಕೆ ಜೆಕೆ ಟ್ರೋಫಿ ಕಿರೀಟ

ಸ್ಪೋರ್ಟ್ಸ್ ಮೇಲ್ ವರದಿ

ಜೆ.ಕೆ. ಸ್ಪೋರ್ಟ್ಸ್ (ರಿ) ಅಂಕದಕಟ್ಟೆ ಇವರ ಆಶ್ರಯದಲ್ಲಿ ನಡೆದ ಜೆ.ಕೆ. ಟ್ರೋಫಿ 30 ಗಜಗಳ ಕ್ರಿಕೆಟ್ ಚಾಂಪಿಯನ್‌ಷಿಪ್ ಪಟ್ಟವನ್ನು ಕುಂದಾಪುರದ ಚಾಲೆಂಜ್ ತಂಡ ಗೆದ್ದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಅಂಕದಕಟ್ಟೆಯ ನಿಧಿ ಕ್ರಿಕೆಟರ್ಸ್ ತಂಡವನ್ನು ಸೋಲಿಸಿದ ಜಾಲೆಂಜರ್ ತಂಡ 40,000 ರೂ. ನಗದು ಬಹುಮಾನ ಹಾಗೂ ಟ್ರೋಫಿ ಗೆದ್ದುಕೊಂಡಿತು. ರನ್ನರ್ ಅಪ್ ಸ್ಥಾನ ಪಡೆದ ನಿಧಿ ಅಂಕದಕಟ್ಟೆ 25,000 ರೂ. ನಗದು ಬಹುಮಾನ ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿತು.

ಜಾಲೆಂಜ್  ತಂಡದ ಅಶ್ವಿನ್ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಚಾಲೆಂಜ್  ತಂಡದ ಗಣೇಶ್ ಉತ್ತಮ ಬ್ಯಾಟ್ಸ್‌ಮನ್ ಗೌರವ ಪಡೆದರು. ನಿಧಿ ಅಂಕದಕಟ್ಟೆಯ ಗಣೇಶ್ ಗಿಳಿಯಾರು ಹಾಗೂ ಬೆಸ್ಟ್ ವಿಕೆಟ್‌ಕೀಪರ್ ಪ್ರಶಸ್ತಿಯನ್ನು ಜಾಲಿ ಅಂಕದಕಟ್ಟೆಯ ಸುರೇಶ್ ಟಿಟಿ ರೋಡ್ ತಮ್ಮದಾಗಿಸಿಕೊಂಡರು.
ಸಮಾರೋಪ ಸಮಾರಂಭದಲ್ಲಿ ಚಂದ್ರಶೇಖರ್ ಅಂಕದಕಟ್ಟೆ, ಸತೀಶ್ ಪೂಜಾರಿ ಅಂಕದಕಟ್ಟೆ, ರಾಘವೇಂದ್ರ ಮೆಂಡನ್, ಅರುಣ್ ಪೂಜಾರಿ, ಜೆ.ಕೆ. ಸ್ಪೋಟ್ಸ್ ಕ್ಲಬ್‌ನ ಅಧ್ಯಕ್ಷ ಮಹೇಶ್ ಬಂಗೇರ ಅಂಕದಕಟ್ಟೆ, ಹಿರಿಯ ಕ್ರಿಕೆಟಿಗ ಕೆ.ಪಿ.ಸತೀಶ್, ಹರೀಶ್ ಪೂಜಾರಿ, ಸುರೇಶ್ ದೇವಾಡಿಗ, ರಾಧಾಕೃಷ್ಣ ವರ್ಣ, ಪ್ರದೀಪ್ ಶೆಟ್ಟಿ ಬೆಳ್ಳಾಲ, ಜಯಂತ್ ಮೌಯ್ಲಿ, ಸಂತೋಷ್ ಮೊಹ್ಲಿ, ಸತೀಶ್ ಶೆರ್ವೆಗಾರ್ ಅಂಕದಕಟ್ಟೆ ಪಾಲ್ಗೊಂಡಿದ್ದರು.

Related Articles