Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಮೆಕ್‌ನೀಲ್‌ ಎರಡನೇ ತ್ರಿಶತಕ ಕರ್ನಾಟಕಕ್ಕೆ ಜಯ

ಬೆಂಗಳೂರು: ಮೆಕ್‌ನೀಲ್‌ ಹ್ಯಾಡ್ಲೀ ನೊರೊನ್ಹಾ (312) ಅವರ ಆಕರ್ಷಕ ತ್ರಿಶತಕದ ನೆರವಿನಿಂದ ಕರ್ನಾಟಕ ತಂಡ ಇಲ್ಲಿನ ಆಲೂರು ಅಂಗಣದಲ್ಲಿ ನಡೆದ ಬಿಸಿಸಿಐ ಕರ್ನಲ್‌ ಸಿ.ಕೆ. ನಾಯ್ಡು ಕ್ರಿಕೆಟ್‌ ಟೂರ್ನಿಯಲ್ಲಿ ಉತ್ತರಾಖಂಡ್‌ ವಿರುದ್ಧ 5 ವಿಕೆಟ್‌ ಜಯ ಗಳಿಸಿದೆ. Macneil Hadley Noronha hit triple century Karnataka win against Uttarakhand

ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ 105.3 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 591 ರನ್‌ ಗಳಿಸಿ ಡಿಕ್ಲೇರ್‌ ಘೋಷಿಸಿತ್ತು. ಮೆಕ್‌ನೀಲ್‌ ಹ್ಯಾಡ್ಲಿ ನೊರೊನ್ಹಾ 336 ಎಸೆತಗಳನ್ನೆದುರಿಸಿ 28 ಬೌಂಡರಿ ಹಾಗೂ 15 ಸಿಕ್ಸರ್‌ ನೆರವಿನಿಂದ ಸತತ ಎರಡನೇ ಬಾರಿಗೆ ಸಿಕೆ ನಾಯ್ಡು ಟ್ರೋಫಿಯಲ್ಲಿ ತ್ರಿಶತಕದ ಸಾಧನೆ ಮಾಡಿದರು. ಕಳೆದ ವರ್ಷವೂ 345 ರನ್‌ ಗಳ ಸಾಧನೆ ಮಾಡಿದ್ದರು. ಮೊನೀಶ್‌ ರೆಡ್ಡಿ ವೈ ಆರ್‌ 118 ಎಸೆತಗಳನ್ನೆದುರಿಸಿ  1 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ 121 ರನ್‌ ಗಳಿಸಿ ತಂಡದ ಬೃಹತ್‌ ಮೊತ್ತಕ್ಕೆ ನೆರವಾದರು. ಹರ್ಷಿಲ್‌ ಧರ್ಮಾನಿ 69 ಹಾಗೂ ಅನೀಶ್ವರ್‌ ಗೌತಮ್‌ 44 ರನ್‌ ಗಳಿಸಿದರು. ಪ್ರಖರ್‌ ಚತುರ್ವೇದಿ 29 ರನ್‌ ಗಳಿಸುವ ಮೂಲಕ ಕರ್ನಾಟಕ 591 ರನ್‌ ಬೆಟ್ಟವನ್ನೇ ನಿರ್ಮಿಸಿತು. ಉತ್ತರಾಖಂಡ್‌ ಪರ ಸತ್ಯಂ ಬಾಲಿಯಾನ್‌ 86 ರನ್‌ಗೆ 4 ವಿಕೆಟ್‌ ಗಳಿಸಿದರು.

ದ್ವತೀಯ ಇನ್ನಿಂಗ್ಸ್‌ನಲ್ಲಿ ಕರ್ನಾಟಕಕ್ಕೆ ಜಯ ಗಳಿಸಲು 90 ರನ್‌ಗಳ ಗುರಿ ಸಿಕ್ಕಿತು. ಅನೀಶ್ವರ್‌ ಗೌತಮ್‌ 25* ಹಾಗೂ ಜಸ್ಪರ್‌ ಇ ಜೆ 23* ತಾಳ್ಮೆಯ ಆಟವಾಡುವ ಮೂಲಕ ರಾಜ್ಯ ತಂಡ 13.4 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 94 ರನ್‌ ಗಳಿಸಿ 5 ವಿಕೆಟ್‌ ಜಯ ಸಾಧಿಸಿತು. ಉತ್ತರಾಖಂಡ್‌ ಪರ ಸತ್ಯಂ ಬಾಲಿಯಾನ್‌ 35 ರನ್‌ಗೆ 3 ವಿಕೆಟ್‌ ಗಳಿಸಿದರು.

ಉತ್ತರಾಖಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 71.2 ಓವರ್‌ಗಳಲ್ಲಿ 202 ರನ್‌ಗೆ ಆಲೌಟ್‌ ಆಗಿತ್ತು. ಇಶಾಗ್ರ ಜಾಗೂರಿ 115 ರನ್‌ ಗಳಿಸಿ ತಂಡಕ್ಕೆ ನೆರವಾದರು. ಅರ್ಶು 44 ರನ್‌ ಗಳಿಸಿದರು. ಕರ್ನಾಟಕದ ಪರ ಬೌಲಿಂಗ್‌ನಲ್ಲಿ ಮಿಂಚಿದ ಮನ್ವಂತ್‌ ಕುಮಾರ್‌ ಎಲ್‌. 21 ರನ್‌ಗೆ 4 ವಿಕೆಟ್‌ ಗಳಿಸಿದರೆ, ಪರಾಸ್‌ ಗುರ್ಬಕ್ಸ್‌ 77 ರನ್‌ಗೆ 2 ವಿಕೆಟ್‌ ಹಾಗೂ ಶಶಿಕುಮಾರ್‌ ಕೆ. 59 ರನ್‌ಗೆ 3 ವಿಕೆಟ್‌ ಗಳಿಸಿ ಉತ್ತರಾಖಂಡ್‌ನ ರನ್‌ ಗಳಿಕೆಗೆ ಕಡಿವಾಣ ಹಾಕಿದರು.

ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತರಾಖಂಡ್‌ 158.5 ಓವರ್‌ಗಳಲ್ಲಿ 479 ರನ್‌ ಗಳಿಸಿ ಸರ್ವ ಪತನ ಕಂಡಿತು. ಲಿಂಕಾನ್‌ 50 ರನ್‌, ಆದಿತ್ಯ ಸಿಂಗ್‌ 33, ಇಶಾಗ್ರ ಜಾಗೂರಿ 55, ಅರ್ಣವ್‌ ಮಹಾಜನ್‌ 79 ರನ್‌ ಗಳಿಸಿ ತಂಡಕ್ಕೆ ನೆರವಾದರು. ಮಧ್ಯಮಕ್ರಮಾಂಕದ ಆಟಗಾರ ಪಿ. ದೆವ್ಲಿ ಅಜೇಯ 129 ರನ್‌ ಗಳಿಸಿ ತಂಡ ದಿಟ್ಟ ಉತ್ತರ ನೀಡಲು ನೆರವಾದರು. ಅರುಶ್‌ ಅವರ 78 ರನ್‌ ತಂಡದ ದಿಟ್ಟ ಹೋರಾಟಕ್ಕೆ ನೆರವಾಯಿತು. ಕರ್ನಾಟಕದ ಪರ ಮನ್ವಂತ್‌‌ ಕುಮಾರ್‌ ಎಲ್‌. 61 ರನ್‌ಗೆ 2 ವಿಕೆಟ್‌, ಶಶಿಕುಮಾರ್‌ ಕೆ 153 ರನ್‌ಗೆ 3 ವಿಕೆಟ್‌ ಹಾಗೂ ಗುರ್ಬಕ್ಸ್‌ ಆರ್ಯಾ 149 ರನ್‌ಗೆ 5 ವಿಕೆಟ್‌ ಗಳಿಸಿದರು.


administrator