Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಐಎನ್‌ಬಿಎಲ್‌: ಕ್ವಾರ್ಟರ್‌ ಫೈನಲ್‌ಗೆ ಬೆಂಗಳೂರು ಸೌತ್‌

ಬೆಂಗಳೂರು: ಭಾರತೀಯ ಬಾಸ್ಕೆಟ್‌ಬಾಲ್‌ ಫೆಡರೇಷನ್‌ ಆಶ್ರಯದಲ್ಲಿ ನಡೆಯುತ್ತಿರುವ ಬಿಎಫ್‌ಐ-ಇಂಡಿಯನ್‌ ನ್ಯಾಷನಲ್‌ ಬಾಸ್ಕೆಟ್‌ಬಾಲ್‌ ಲೀಗ್‌ (ಐಎನ್‌ಬಿಎಲ್‌) ಮೊದಲ ಋತುವಿನ ರಾಷ್ಟ್ರೀಯ ಫೈನಲ್ಸ್‌ನಲ್ಲಿ 18ವರ್ಷ ವಯೋಮಿತಿಯ ವನಿತೆಯರ ವಿಭಾಗದಲ್ಲಿ ಬೆಂಗಳೂರು ಸೌತ್‌ ತಂಡವು ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಗುವಾಹಟಿ ವಿರುದ್ಧ ಜಯ ಗಳಿಸಿ ಕ್ವಾರ್ಟರ್‌ ಫೈನಲ್‌‌ ತಲುಪಿದೆ.

ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಬೆಂಗಳೂರು ತಂಡವು ಗುಹಾವಟಿ ವಿರುದ್ಧ 17-9 ಅಂತರದಲ್ಲಿ ಜಯ ಗಳಿಸಿತು. ಇದಕ್ಕೂ ಮೊದಲು ನಡೆದ ಲೀಗ್‌ ಹಂತದ ಪಂದ್ಯದಲ್ಲಿ ಬೆಂಗಳೂರು ಸೌತ್‌ ತಂಡ ಮುಂಬೈ ವಿರುದ್ಧ 17-12 ಅಂತರದಲ್ಲಿ ಜಯ ಗಳಿಸಿತ್ತು. ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಬೆಂಗಳೂರು ತಂಡ ಇಂದೋರ್‌ ವಿರುದ್ಧ ಸೆಣಸಲಿದೆ.

ಭಾನುವಾರ ನಡೆಯುವ ಇತರ ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಚೆನ್ನೈ ಎಗ್ಮೋರ್‌ ತಂಡವು ಚಂಡೀಗಢ ವಿರುದ್ಧ, ಭಿಲಾಯಿ ತಂಡವು ಜೈಪುರ ವಿರುದ್ಧ, ಲುಧಿಯಾನ ತಂಡವು ಲಖನೌ ವಿರುದ್ಧ ಸೆಣಸಲಿವೆ.

ಪುರುಷರ ವಿಭಾಗದಲ್ಲಿ ಜೈಪುರ ತಂಡವು ಭಿಲಾಯಿ ವಿರುದ್ಧ, ಲಖನೌ ತಂಡವು, ಚೆನ್ನೈ ವಿರುದ್ಧ, ಭಾವನಗರ ತಂಡವು ಇಂದೋರ್‌ ವಿರುದ್ಧ, ಚಂಢೀಗಢ ತಂಡವು ಲುಧಿಯಾನ ವಿರುದ್ಧ ಸೆಮಿಫೈನಲ್‌ ಸ್ಥಾನಕ್ಕಾಗಿ ಸೆಣಸಲಿವೆ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.