ಕರ್ನಾಟಕದ ದಾಳಿಗೆ ಗಿಲ್ ಪಡೆ ಡಲ್
ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂಜಾಬ್ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡದ ಬೌಲರ್ ಹಾಗೂ ಬ್ಯಾಟ್ಸ್ಮನ್ ಉತ್ತಮ ಪ್ರದರ್ಶನ ತೋರಿದ ಪರಿಣಾಮ ರಾಜ್ಯ ತಂಡ ಮೊದಲ ದಿನಲ್ಲೇ ಮೇಲುಗೈ ಸಾಧಿಸಿದೆ. Punjab all out for 55 in first innings against Karnataka, host lead 144 runs.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಕರ್ನಾಟಕ ಪ್ರವಾಸಿ ಪಂಜಾಬ್ ತಂಡವನ್ನು 55 ರನ್ಗೆ ಆಲೌಟ್ ಮಾಡಿತ್ತು. ವೇವಿಗಳ ಬೌಲಿಂಗ್ ದಾಳಿಗೆ ತತ್ತರಿಸಿದ ಪಂಜಾಬ್ ರನ್ ಗಳಿಸುವಲ್ಲಿ ಸಂಪೂರ್ಣ ವಿಫಲವಾಯಿತು. ಕೌಶಿಕ್ ವಾಸುಕಿ 16 ರನ್ಗೆ 4 ವಿಕೆಟ್, ಅಭಿಲಾಶ್ ಶೆಟ್ಟಿ 19 ರನ್ಗೆ 3 ವಿಕೆಟ್, ಪ್ರಸೀಧ್ ಕೃಷ್ಣ 11 ರನ್ಗೆ 2 ವಿಕೆಟ್ ಹಾಗೂ ಯಶೋವರ್ಧನ್ ಪರಾಂತಪ್ 3 ರನ್ಗೆ 1 ವಿಕೆಟ್ ಗಳಿಸಿ ಪ್ರಭುತ್ವ ಸಾಧಿಸಿದರು.
ಕರ್ನಾಟಕ ತನ್ನ ಪ್ರಥಮ ಇನ್ನಿಂಗ್ಸ್ನಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ 144 ರನ್ ಮುನ್ನಡೆ ಕಂಡಿದೆ. ರವಿಚಂದ್ರನ್ ಸ್ಮರಣ್ ಅಜೇಯ 83 ರನ್ ಗಳಿಸಿದ್ದು ಶತಕದತ್ತ ಹೆಜ್ಜೆ ಹಾಕಿದ್ದಾರೆ.