Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ವಾರಿಯರ್ಸ್‌ಗೆ ಸೋಲುಣಿಸಿದ ಬುಲ್ಸ್

ಸ್ಪೋರ್ಟ್ಸ್ ಮೇಲ್ ವರದಿ 
ಜಯದ ನಾಗಾಲೋಟದಲ್ಲಿ ಸಾಗುತ್ತಿದ್ದ ಮೈಸೂರು ವಾರಿಯರ್ಸ್ ತಂಡಕ್ಕೆ ಕೊನೆಗೂ ಬಿಜಾಪುರ ಬುಲ್ಸ್ ತಡೆಯೊಡ್ಡಿದೆ. ಶನಿವಾರ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಬಿಜಾಪುರ ಬುಲ್ಸ್ ತಂಡ ಮೈಸೂರು ವಾರಿಯರ್ಸ್ ವಿರುದ್ಧ 2 ರನ್‌ಗಳ ರೋಚಕ ಜಯ ಗಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಬಿಜಾಪುರ ಬುಲ್ಸ್ 6 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಮೈಸೂರು ವಾರಿಯರ್ಸ್ 5 ವಿಕೆಟ್ ನಷ್ಟಕ್ಕೆ ಕೇವಲ 165 ರನ್ ಗಳಿಸಿ 2 ರನ್ ಅಂತರದಲ್ಲಿ ಸೋಲೊಪ್ಪಿಕೊಂಡಿತು. ಈ ಸೋಲಿನಿಂದ ಮೈಸೂರು ತಂಡ ಆತ್ಮವಿಶ್ವಾಸ ಕಳೆದುಕೊಳ್ಳಬೇಕಾದ ಅಗತ್ಯವಿಲ್ಲ, ಏಕೆಂದರೆ 6 ಅಂಕಗಳನ್ನು ಗಳಿಸಿರುವ ತಂಡಕ್ಕೆ ಸೆಮಿಫೈನಲ್  ಹಾದಿ ಕಷವಾಗಿಲ್ಲ. ಇನ್ನೂ ಒಂದು ಪಂದ್ಯದ ಅವಕಾಶವಿದೆ. ಬಿಜಾಪುರ ಬುಲ್ಸ್ ಗೆದ್ದರೂ ಸೆಮಿಫೈನಲ್ ಹಾದಿ ಕಠಿಣವಾಗಿದೆ. ಭರತ್ ಚಿಪ್ಲಿ 63 ರನ್, ಕೌನೇನ್‌ಅಬ್ಬಾಸ್ 42, ಸುನೀಲ್ ರಾಜು 28 ರನ್ ಗಳಿಸುವುದರೊಂದಿಗೆ ಬುಲ್ಸ್ ಪಡೆ ಸವಾಲಿನ ಮೊತ್ತ ದಾಖಲಿಸಿತು. ಮೈಸೂರು ವಾರಿಯರ್ಸ್ ಪರ ಎನ್. ಭರತ್ 27ಕ್ಕೆ 2, ಪ್ರತೀಕ್ ಜೈನ್ 15ಕ್ಕೆ 2 ವಿಕೆಟ್ ಗಳಿಸಿ ಗಮನ ಸೆಳೆದರು.
ಮೈಸೂರು ವಾರಿಯರ್ಸ್ ಪರ ರಾಜು ಭಟ್ಕಳ್ 29, ಕೆವಿ ಸಿದ್ಧಾರ್ಥ್ 28, ಜೆ. ಸುಚಿತ್ 34 * ರನ್‌ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಬುಲ್ಸ್ ಪರ ಕೆ.ಸಿ. ಕಾರಿಯಪ್ಪ 23 ರನ್‌ಗೆ 2 ವಿಕೆಟ್ ಗಳಿಸಿ ಜಯದಲ್ಲಿ  ಭಾಗಿಯಾದರು.

administrator