Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ದಾಖಲೆಯೊಂದಿಗೆ ಮಂಗಳೂರಿಗೆ ಚಿನ್ನದ “ಆದೇಶ”

sportsmail:

ಮೂಡಬಿದಿರೆಯ ಸ್ವರಾಜ್‌ ಮೈದಾನದಲ್ಲಿ ನಡೆಯುತ್ತಿರುವ 81ನೇ ಅಖಿಲ ಭಾರತ ಅಂತ್‌ ವಿಶ್ವವಿದ್ಯಾನಿಲಯ ಅಥ್ಲೆಟಿಕ್ಸ್‌ ಚಾಂಪಿಯನ್ಷಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಆದೇಶ್‌ 10,000 ಮೀ. ಓಟದಲ್ಲಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ.

 

ಇದರೊಂದಿಗೆ ಆತಿಥೇಯ ಮಂಗಳೂರು ವಿಶ್ವವಿದ್ಯಾಲಯ ಚಿನ್ನದೊಂದಿಗೆ ತನ್ನ ಪದಕದ ಖಾತೆ ತೆರೆದಿದೆ.

29:15.46 ಸೆಕೆಂಡುಗಳಲ್ಲಿ ಗುರಿ ತಲುಪಿದ ಆದೇಶ್‌ ಅಗ್ರ ಸ್ಥಾನದೊಂದಿಗೆ ನೂತನ ದಾಖಲೆ ಬರೆದರು.

29:18.82  ಸೆಕೆಂಡುಗಳಲ್ಲಿ ಗುರಿ ತಲುಪಿದ ಜನನಾಯಕ ಚಂದ್ರಶೇಖರ್‌ ವಿಶ್ವವಿದ್ಯಾನಿಲಯದ ಆರೀಫ್‌ ಅಲಿ ಹಿಂದಿನ ಕೂಟ ದಾಖಲೆಯನ್ನು ಮುರಿದು ಬೆಳ್ಳಿ ಗೆದ್ದರು.

29:46.39 ಸೆಕೆಂಡುಗಳಲ್ಲಿ ಗುರಿ ತಲುಪಿದ ಮಹರ್ಷಿ ದಯಾನಂದ ಸಾಗರ್‌ ವಿವಿಯ ಶುಭಂ ಸಿಂಧೂ ಕಂಚಿನ ಪದಕ ಗೆದ್ದರು.

29:27.45 ಸೆಕೆಂಡುಗಳಲ್ಲಿ ಗುರಿ ತಲುಪಿದ ವಿ.ಬಿ.ಎಸ್‌.ಪಿ.ಯು. ಜೌನ್ಪುರದ ರಾಮ್‌ ವಿನೋದ್‌ ಯಾದವ್‌ ಹಿಂದಿನ ಕೂಟ ದಾಖಲೆಯನ್ನು ಮುರಿದು ಕಂಚಿನ ಪದಕ ಗೆದ್ದಿದ್ದರು, ಆದರೆ ಟ್ರ್ಯಾಕ್‌ ನಿಯಮ ಉಲ್ಲಂಘಿಸಿದ ಕಾರಣ ಅವರನ್ನು ಅನರ್ಹರೆಂದು ಘೋಷಿಸಲಾಯಿತು.

ಮಂಗಳೂರು ವಿಶ್ವವಿದ್ಯಾನಿಲಯದ ಇನ್ನೋರ್ವ ಸ್ಪರ್ಧಿ ಭುಪೇಂದ್ರ ಸಿಂಗ್‌ 11ನೇ ಸ್ಥಾನ ಗಳಿಸಿದರು.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.