Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಜುಲೈ 19ರಂದು ಚೆಸ್‌ ಒಲಂಪಿಯಾಡ್‌ ಕ್ರೀಡಾ ಜ್ಯೋತಿ ಮಂಗಳೂರಿಗೆ

ಬೆಂಗಳೂರು: ಜಗತ್ತಿನ ಕ್ರೀಡಾ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯುತ್ತಿರುವ ಚೆಸ್‌ ಒಲಂಪಿಯಾಡ್‌ ಕ್ರೀಡಾ ಜ್ಯೋತಿಯ ರಿಲೆಯು ಜುಲೈ 19ರಂದು ಮಂಗಳೂರಿಗೆ ಆಗಮಿಸಲಿದೆ. ಇದಕ್ಕೂ ಮುನ್ನ ಜುಲೈ 18ರಂದು ರಾಜಧಾನಿ ಬೆಂಗಳೂರಿಗೆ ಆಗಮಿಸಲಿದೆ.

28 ಜುಲೈಯಿಂದ 10 ಆಗಸ್ಟ್‌ ತನಕ ಮಹಾಬಲಿಪುರಂನಲ್ಲಿ ಚೆಸ್‌ ಒಲಂಪಿಯಾಡ್‌ ನಡೆಯಲಿದೆ.

ಚೆಸ್‌ ಒಲಂಪಿಯಾಡ್‌ ಇತಿಹಾಸಲ್ಲಿ ಇದುವರೆಗೂ ಕ್ರೀಡಾ ಜ್ಯೋತಿಯ ರಿಲೇ ನಡೆದಿರಲಿಲ್ಲ. ಚೆಸ್‌ ಕ್ರೀಡೆ ಹುಟ್ಟಿದ ಭಾರತದಲ್ಲಿ ಮೊದಲ ಬಾರಿಗೆ ಈ ಐತಿಹಾಸಿಕ ಕಾರ್ಯಕ್ರಮವನ್ನು ನಡೆಸಲು ಅಂತಾರಾಷ್ಟ್ರೀಯ ಚೆಸ್‌ ಫೆಡರೇಷನ್‌ ತೀರ್ಮಾನಿಸಿದೆ.

ಮಂಗಳೂರಿನಿಂದ ಜ್ಯೋತಿಯ ಲಕ್ಷದ್ವೀಪ ಹಾಗೂ ಆ ನಂತರ ಕೇರಳದ ತ್ರಿಶೂರ್‌ ಹಾಗೂ ತಿರುವನಂತಪುರಕ್ಕೆ ಪ್ರಯಾಣಿಸಲಿದೆ.

ಈ ಬಾರಿ ಸಮಯದ  ಅಭಾವದಿಂದ ಕ್ರೀಡಾ ಜ್ಯೋತಿಯು ಆತಿಥೇಯ ಭಾರತದಲ್ಲಿ ಮಾತ್ರ ಸಂಚರಿಸಲಿದ್ದು, ಮುಂದಿನ ಚೆಸ್‌ ಒಲಂಪಿಯಾಡ್‌ನಲ್ಲಿ ಜಗತ್ತಿನಾದ್ಯಂತ ಪ್ರಯಾಣಿಸಲಿದೆ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.