Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ದಕ್ಷಿಣ ಭಾರತ ರಾಜ್ಯಗಳ ಆಹ್ವಾನಿತ ವಾಲಿಬಾಲ್ ಟೂರ್ನಿ

ಸ್ಪೋರ್ಟ್ಸ್ ಮೇಲ್ ವರದಿ

ಫೆಬ್ರವರಿ 9 ಮತ್ತು 10ರಂದು ಹರಿಹರದ ಗಾಂಧಿ ಮೈದಾನದಲ್ಲಿ ದಕ್ಷಿಣ ಭಾರತ ರಾಜ್ಯಗಳ ಅಹ್ವಾನಿತ ವಾಲಿಬಾಲ್ ಚಾಂಪಿಯನ್‌ಷಿಪ್ ನಡೆಯಲಿದೆ. ಜಿ. ಮಲ್ಲಿಕಾರ್ಜುನಪ್ಪ ಹಾಗೂ ಹಾಲಮ್ಮ ದಂಪತಿಯ ಸ್ಮರಣಾರ್ಥ ನಡೆಯಲಿರುವ ಈ ಚಾಂಪಿಯನ್‌ಷಿಪ್‌ನಲ್ಲಿ ವಿಜೇತ ತಂಡವು 1 ಲಕ್ಷ ರೂ. ನಗದು ಬಹುಮಾನವನ್ನು ತನ್ನದಾಗಿಸಿಕೊಳ್ಳಲಿದೆ.

ಹರಿಹರದ ಪ್ರತಿಬಿಂಬ ಗ್ರೂಪ್ಸ್ (ರಿ) ಇವರು ಆಯೋಜಿಸಿರುವ ಚಾಂಪಿಯನ್‌ಷಿಪ್ ಹೊನಲು ಬೆಳಕಿನಲ್ಲಿ ನಡೆಯಲಿದೆ.  ಎರಡು ದಿನಗಳ ಕಾಲ ನಡೆಯಲಿರುವ ಈ ಚಾಂಪಿಯನ್‌ಷಿಪ್‌ನಲ್ಲಿ ವಿಜೇತ ತಂಡ 1 ಲಕ್ಷ ರೂ. ನಗದು ಬಹುಮಾನದ ಜತೆಯಲ್ಲಿ ಆಕರ್ಷಕ ಟ್ರೋಫಿಯನ್ನು ಗೆಲ್ಲಲಿದೆ. ಎರಡನೇ ಸ್ಥಾನ ಗಳಿಸುವ ತಂಡ 75 ಸಾವಿರ ರೂ. ನಗದು ಬಹುಮಾನದ ಜತೆಯಲ್ಲಿ ಆಕರ್ಷಕ ಟ್ರೋಫಿ ಗೆಲ್ಲಲಿದೆ. ಮೂರನೇ ಸ್ಥಾನ ಗೆಲ್ಲುವ ತಂಡ  50,000 ರೂ. ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ತನ್ನದಾಗಿಸಿಕೊಳ್ಳಲಿದೆ. ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡುವ ತಂಡ 25,000 ರೂ. ನಗದು ಬಹುಮಾನ ಹಾಗೂ ಟ್ರೋಫಿಯನ್ನು ಗೆಲ್ಲಲಿದೆ.
ಹೆಚ್ಚಿನ ವಿವರಗಳಿಗೆ ಹನುಂತರಾಜು ನಂದಿಗಾವಿ 9742333317, ಮೊಹಮ್ಮದ್ ಅಲಿ 9060146155, ಅಸ್‌ೀವುಲ್ಲಾ ಖಾಜಿ  9620894011 ಹಾಗೂ ಕಿರಣ್ ಹುಯಿಲಗೊಳ 9945051052 ಅವರನ್ನು ಸಂಪರ್ಕಿಸಬಹುದು.

administrator