Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಜಾಂಬಿಯಾ ವಿರುದ್ಧ ಭಾರತದ ಅಂತಾರಾಷ್ಟ್ರೀಯ ಫುಟ್ಬಾಲ್‌ ಪಂದ್ಯ

ಹೊಸದಿಲ್ಲಿ: ಮೇ 25ರಂದು ಭಾರತ ಫುಟ್ಬಾಲ್‌ ತಂಡವು ಉನ್ನತ ರಾಂಕ್‌ ಹೊಂದಿರುವ ಜಾಂಬಿಯಾ ವಿರುದ್ಧ ಅಂತಾರಾಷ್ಟ್ರೀಯ ಸೌಹಾರ್ಧ ಪಂದ್ಯವನ್ನಾಡಲಿದೆ ಎಂದು ಫೆಡರೇಷನ್‌ ತಿಳಿಸಿದೆ.

ಕೋಲ್ಕೊತಾದಲ್ಲಿ ಜೂನ್‌ 8ರಂದು ನಡೆಯಲಿರುವ ಎಎಫ್‌ಸಿ ಏಷ್ಯನ್‌ ಕಪ್‌ ಕ್ವಾಲಿಫಯರ್‌ ಫೈನಲ್‌ ಸುತ್ತಿನ ಪಂದ್ಯದ ಸಿದ್ಧತೆಯ ಭಾಗವಾಗಿ ಭಾರತ ಈ ಪಂದ್ಯವನ್ನು ಆಡಲಿದೆ.

ಫಿಫಾ ರಾಂಕಿಂಗ್‌ನಲ್ಲಿ ಜಾಂಬಿಯಾ 87ನೇ ರಾಂಕ್‌ ಹೊಂದಿದ್ದು, ಭಾರತ 106ನೇ ರಾಂಕ್‌ನಲ್ಲಿದೆ.

“ಮೇ 25ರಂದು ಬ್ಲೂ ಟೈಗರ್ಸ್‌ ಖ್ಯಾತಿಯ ಭಾರತ ತಂಡ ಜಾಂಬಿಯಾ ವಿರುದ್ಧ ದೋಹಾದಲ್ಲಿ ಸೌಹಾರ್ಧ ಪಂದ್ಯವನ್ನು ಆಡಲಿದೆ,” ಎಂದು ಅಖಲಿ ಭಾರತ ಫುಟ್ಬಾಲ್‌ ಫೆಡರೇಷನ್‌ ಖಚಿತಪಡಿಸಿದದೆ. ಮಾರ್ಚ್‌ನಲ್ಲಿ ಭಾರತ ತಂಡ ಬಹೆರಿನ್‌ ಮತ್ತು ಬೆಲಾರೂಸ್‌ ವಿರುದ್ಧ ಬಹೆರಿನ್‌ನಲ್ಲಿ ಸೌಹಾರ್ಧ ಪಂದ್ಯವನ್ನಾಡಿತ್ತು.

ಏಪ್ರಿಲ್‌ 23ರಿಂದ ಬಳ್ಳಾರಿ ಮತ್ತು ಕೋಲ್ಕೊತಾದಲ್ಲಿ ಅಭ್ಯಾಸ ನಡೆಸುತ್ತಿರುವ ಭಾರತ ತಂಡ,  ಐ ಲೀಗ್‌ನ ಆಲ್‌ ಸ್ಟಾರ್‌ ಇಲೆವೆಲ್‌ ಮತ್ತು ಬಂಗಾಳದ ಸಂತೋಷ್‌ ಟ್ರೋಫಿ ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿದೆ. ಮೇ 11ರಂದು ಎಟಿಕೆ ಮೋಹನ್‌ ಬಾಗನ್‌ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡ 1-2 ಗೋಲುಗಳ ಅಂತರದಲ್ಲಿ ಸೋಲನುಭವಿಸಿತ್ತು.

ಏಷ್ಯನ್‌ ಕಪ್‌ ಕ್ವಾಲಿಫಯರ್‌ ಅಂತಿಮ ಸುತ್ತಿನ ಪಂದ್ಯಗಳು ಜೂನ್‌ 8, 11 ಮತ್ತು 14ರಂದು ನಡೆಯಲಿದ್ದು, ಗ್ರೂಪ್‌ನಲ್ಲಿ ವಿಜೇತ ತಂಡ ಹಾಗೂ ಎರಡನೇ ಸ್ಥಾನ ಪಡೆದ ಉತ್ತಮ ಐದು ತಂಡಗಳು ಚೀನಾದಲ್ಲಿ ನಡೆಯಲಿರುವ ಟೂರ್ನಿಗೆ ಅರ್ಹತೆ ಪಡೆಯಲಿವೆ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.