Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ನಿರಂತರ ಸೋಲು: ನಾಯಕತ್ವ ಕಳೆದುಕೊಂಡ ವಿನಯ್ ಕುಮಾರ್

ಸ್ಪೋರ್ಟ್ಸ್ ಮೇಲ್ ವರದಿ

ಬಹಳ ಸಮಯದಿಂದ ಕರ್ನಾಟಕ ರಣಜಿ ಹಾಗೂ ಏಕದಿನ ತಂಡವನ್ನು ಮುನ್ನಡೆಸುತ್ತಿದ್ದ ಭರವಸೆಯ ನಾಯಕ ಆರ್. ವಿಯನ್ ಕುಮಾರ್ ಪ್ರಸಕ್ತ ನಡೆಯುತ್ತಿರುವ ವಿಜಯ ಹಜಾರೆ ಟ್ರೋಫಿಯ ಕಳಪೆ ಫಲಿತಾಂಶದ ಪರಿಣಾಮ ಕರ್ನಾಟಕ ತಂಡದ ನಾಯಕತ್ವವನ್ನು ಕಳೆದುಕೊಳ್ಳಬೇಕಾಯಿತು. ಆಯ್ಕೆ ಸಮಿತಿ ಮನೀಶ್ ಪಾಂಡೆ ಅವರಿಗೆ ಮುಂದಿನ ಪಂದ್ಯಗಳ ನಾಯಕತ್ವವನ್ನು ನೀಡಿದೆ.

ಆಡಿರುವ ನಾಲ್ಕು ಪಂದ್ಯಗಳಲ್ಲಿ ಕರ್ನಾಟಕ ಮೂರು ಪಂದ್ಯಗಳಲ್ಲಿ ಸೋಲನುಭವಿಸಿದೆ.
ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಆಡುತ್ತಿರುವ ಮನೀಶ್ ಪಾಂಡೆ ಪಂದ್ಯ ಮುಗಿದ ನಂತರ  ರಾಜ್ಯ ತಂಡವನ್ನು ಸೇರಿಕೊಳ್ಳಲಿದ್ದಾರೆ. ಸಿ.ಎಂ. ಗೌತಮ್ ಕೂಡ ತಂಡದಿಂದ  ಹೊರಗುಳಿದಿದ್ದು, ಶರತ್ ಶ್ರೀನಿವಾಸ್ ಹಾಗೂ ಶರತ್ ಬಿ.ಆರ್. ವಿಕೆಟ್ ಕೀಪಿಂಗ್‌ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ

ತಂಡದ ವಿವರ

ಮನೀಶ್ ಪಾಂಡೆ (ನಾಯಕ), ಆರ್. ವಿನಯ್ ಕುಮಾರ್, ಆರ್. ಸಮರ್ಥ್, ಅನಿರುಧ್  ಜೋಶಿ, ಪವನ್ ದೇಶಪಾಂಡೆ, ಗೌಮತ್ ಕೆ., ಶ್ರೇಯಸ್ ಗೋಪಾಲ್, ಅಭಿಮನ್ಯು ಮಿಥುನ್, ಸುಚಿತ್ ಜೆ, ಮಿರ್ ಕೌನೇನ್ ಅಬ್ಬಾಸ್, ಅಭಿಷೇಕ್ ರೆಡ್ಡಿ, ಪ್ರದೀಪ್ ಟಿ., ನವೀನ್ ಎಂ,ಜೆ. ಶರತ್ ಬಿ.ಆರ್. ಶರತ್ ಶ್ರೀನಿವಾಸ್.

administrator