Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಅಂದು ರಿಕ್ಷಾ ಚಾಲಕ, ಇಂದು ಮುಂಬಯಿಯ ಚಾಂಪಿಯನ್‌ ಬೌಲರ್!

ಮುಂಬಯಿ: ಮುಂಬಯಿ ಕ್ರಿಕೆಟ್‌ ತಂಡ 27 ವರ್ಷಗಳ ಬಳಿಕ ಇರಾನಿ ಟ್ರೋಫಿ ಚಾಂಪಿಯನ್‌ ಪಟ್ಟ ಗೆದ್ದಿದೆ. ಈ ತಂಡದಲ್ಲಿ ಹಿಂದೆ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ ಒಬ್ಬ ವೇಗದ ಬೌಲರ್‌ ಶ್ರಮ ಇದೆ ಎಂದಾಗ ಅಚ್ಚರಿಯಾಗುತ್ತದೆ. ಅದು ಕೂಡ ಸಾಧ್ಯವಾದುದು ಒಬ್ಬ ಕನ್ನಡಿಗನ ಮುತುವರ್ಜಿಯಿಂದ. Autorickshaw driver Juned Khan Indian cricket’s new fast Bowling sensation.

ಶೇಷ ಭಾರತ ತಂಡದ ನಾಯಕ ರುತುರಾಜ್‌ ಗಾಯಕವಾಡ್‌ ಅವರನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಔಟ್‌ ಮಾಡಿದ್ದು ಮೊಹಮ್ಮದ್‌ ಜುನೇದ್‌ ಖಾನ್‌. ಈ ಬೌಲರ್‌ ಬದುಕಿನ ಹಾದಿಯನ್ನು ಗಮನಿಸಿದಾಗ ಪ್ರತಿಭೆ ಯಾರ ಸ್ವತ್ತೂ ಅಲ್ಲ ಎಂಬುದು ಮತ್ತೊಮ್ಮೆ ಸ್ಪಷ್ಟವಾಗುತ್ತದೆ. ಹೊಟ್ಟೆ ಪಾಡಿಗಾಗಿ ದೂರದ ಉತ್ತರ ಪ್ರದೇಶದಿಂದ ಮುಂಬಯಿಗೆ ಬಂದು ಗಾರ್ಮೆಂಟ್ಸ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಜುನೇದ್‌ ಖಾನ್‌ ನಂತರ ಆಟೋ ಓಡಿಸುತ್ತಿದ್ದ. ಇದನ್ನು ಗಮನಿಸಿದ ಮುಂಬಯಿಯ ಮಾಜಿ ಆಟಗಾರ, ವಿಕೆಟ್‌ ಕೀಪರ್‌ ಮನೀಶ್‌ ಬಂಗೇರ ತಮ್ಮದೇ ಆದ ಸಂಜೀವನಿ ಕ್ರಿಕೆಟ್‌ ಅಕಾಡೆಮಿಯಲ್ಲಿ ಆಡಲು ಅವಕಾಶ ನೀಡುತ್ತಾರೆ. ಟೆನಿಸ್‌ ಬಾಲ್‌ ಕ್ರಿಕೆಟ್‌ನಲ್ಲಿ ಉತ್ತಮ ಬೌಲಿಂಗ್‌ ಮಾಡುತ್ತಿದ್ದ ಜುನೇದ್‌ ಅವರನ್ನು ಗುರುತಿಸಿ ತಮ್ಮ ಅಕಾಡೆಮಿಯಲ್ಲಿ ಅವಕಾಶ ನೀಡಿದ ಮನೀಶ್‌ ಬಂಗೇರ ಭಾರತದ ಕ್ರಿಕೆಟ್‌ಗೆ ಒಬ್ಬ ಉತ್ತಮ ಬೌಲರನ್ನು ನೀಡುವಲ್ಲಿ ಯಶಸ್ವಿಯಾದರು.

ಮುಂಬಯಿ ಕ್ರಿಕೆಟ್‌ನಲ್ಲಿ ಕನ್ನಡಿಗರ ಕೊಡುಗೆ ಅಪಾರ. ಸದ್ಯ ಮುಂಬಯಿ ರಣಜಿ ತಂಡದಲ್ಲಿ ಆಡುತ್ತಿರುವ ತನುಷ್‌ ಕೋಟ್ಯಾನ್‌ ಕೂಡ ಉಡುಪಿ ಸಮೀಪದ ಪಾಂಗಳ ಮೂಲದವರು. ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಕನ್ನಡಿಗರ ಪಯ್ಯಡೆ ಅಕಾಡೆಮಿಯಲ್ಲಿ ಪಳಗಿದವರು. ಮುಂಬಯಿ ಕ್ರಿಕೆಟ್‌ ಸಂಸ್ಥೆಗೆ ಡಾ. ರತ್ನಾಕರ ಶೆಟ್ಟಿ ಅವರ ಕೊಡುಗೆ ಅಪಾರ.

ಬುಚ್ಚಿಬಾಬು ಕ್ರಿಕೆಟ್‌ ಚಾಂಪಿಯನ್‌ಷಿಪ್‌ ಹಾಗೂ ಕೆಎಸ್‌ಸಿಎ ಆಹ್ವಾನಿತ ಕ್ರಿಕೆಟ್‌ ಟೂರ್ನಿಯಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶಿಸಿ ಆಯ್ಕೆ ಸಮಿತಿಯ ಗಮನ ಸೆಳೆಯುವಲ್ಲಿ ಜುನೇದ್‌ ಯಶಸ್ವಿಯಾಗುತ್ತಾರೆ. ಮುಂಬಯಿ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಅಭಿಷೇಕ್‌ ನಾಯರ್‌ ಕೂಡ ಜುನೇದ್‌ ಬೌಲಿಂಗ್‌ ಶೈಲಿಯನ್ನು ನೋಡಿ ಮನಸೋತವರು. ಗೆಳೆಯರೆಲ್ಲ ಸೇರಿ ಕೊಡಿಸಿದ ಶೂ ಧರಿಸಿ ಅಂಗಣಕ್ಕಿಳಿದ ಜುನೇದ್‌ ಮುಂಬಯಿ ಕ್ರಿಕೆಟ್‌ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾದರು.


administrator