Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕೆಬಿಎ: ಬ್ಯಾಡ್ಮಿಂಟನ್‌ ತಾರೆಯರ ಸಮ್ಮುಖದಲ್ಲಿ ಗಣರಾಜ್ಯೋತ್ಸವ

ಬೆಂಗಳೂರು: ದೇಶದೆಲ್ಲೆಡೆ ಇಂದು 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್‌ ಸಂಸ್ಥೆಯಲ್ಲಿ ನೂತನ ಅಧ್ಯಕ್ಷ, ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ಅವರ ಮುತುವರ್ಜಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. Olympian Ashwini Ponnappa participated in the 77th Republic Day celebrations held at the Karnataka State Badminton Association.

ಕಾರ್ಯಕ್ರಮದ ಬಳಿಕ ಅಧ್ಯಕ್ಷ ಕುಮಾರ್‌ ಬಂಗಾರಪ್ಪ ಅವರು ಅಂತಾರಾಷ್ಟ್ರೀಯ ಆಟಗಾರ್ತಿ ಒಲಿಂಪಿಯನ್‌ ಅಶ್ವಿನಿ ಪೊನ್ನಪ್ಪ ಅವರೊಂದಿಗೆ ರಾಜ್ಯದಲ್ಲಿ ಬ್ಯಾಡ್ಮಿಂಟನ್‌ ಅಭಿವೃದ್ಧಿಗೆ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದರು. ಅದೇ ರೀತಿ ಅಶ್ವಿನಿ ಪೊಪ್ಪಪ್ಪ ನೀಡಿದ ಸಲಹೆಗಳನ್ನು ಸ್ವೀರಕಿಸಿ, ಅವುಗಳನ್ನು ಅನುಷ್ಠಾನಗೊಳಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್‌ ಸಂಸ್ಥೆಯ ಕಾರ್ಯದರ್ಶಿ ವಿ. ಮುರಳೀಧರ್‌. ಕಾರ್ಯಕಾರಿ ಸಮಿತಿಯ ಸದಸ್ಯರಾದ ಎಂ. ಸಿ, ಸುಧೀರ್‌, ಹರೀಶ್‌ ಕುಮಾರ್‌ ಬಿ ಆರ್‌ ಹಾಗೂ ಅಂತಾರಾಷ್ಟ್ರೀಯ ಮಾಜಿ ಆಟಗಾರ್ತಿ ಬಿ. ಆರ್‌. ಮೀನಾಕ್ಷಿ ಹಾಗೂ ಇತರ ಪ್ರಮುಖರು ಹಾಜರಿದ್ದರು.

ಕುಮಾರ ಬಂಗಾರಪ್ಪ ಅವರ ನೇತ್ರತ್ವದ ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆ ರಾಜ್ಯದ ಗ್ರಾಮೀಣ ಪ್ರದೇಶಗಳಿಗೆ ಬ್ಯಾಡ್ಮಿಂಟನ್‌ ಕ್ರೀಡೆಯನ್ನು ಒಯ್ಯುವ ಗುರಿಹೊಂದಿದ್ದು, ಈ ಕ್ರೀಡೆಯ ಅಭಿವೃದ್ಧಿಗೆ ಹೊದ ಆಯಾಮ ನೀಡುವ ತವಕದಲ್ಲಿದೆ.


administrator