Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಸೌಜನ್ಯ, ರುತುಜಾಗೆ ಡಬಲ್ಸ್‌ ಪ್ರಶಸ್ತಿ

Sportsmail         

ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯ ಅಂಗಣದಲ್ಲಿ ನಡೆಯುತ್ತಿರುವ 15,000ಯುಎಸ್‌ ಡಾಲರ್‌ ಮೊತ್ತದ ಕೆಎಸ್‌ಎಲ್‌ಟಿಎ ಐಟಿಎಫ್‌ ವಿಶ್ವ ಮಹಿಳಾ ಟೂರ್‌ ಚಾಂಪಿಯನ್ಷಿಪ್‌ನಲ್ಲಿ ಸೌಜನ್ಯ ಬಾವಿಸೆಟ್ಟಿ ಮತ್ತು ಋುತುಜಾ ಭೋಸ್ಲೆ ಜೋಡಿ ಡಬಲ್ಸ್‌ ಪ್ರಶಸ್ತಿ ಗೆದ್ದುಕೊಂಡಿದೆ.

ಶನಿವಾರ ನಡೆದ ಫೈನಲ್‌ ಪಂದ್ಯದಲ್ಲಿ ಸೌಜನ್ಯ ಮತ್ತು ರುತುಜಾ ಜೋಡಿ ಎದುರಾಳಿ ವೈದೇಹಿ ಚೌಧರಿ ಮತ್ತು ಮಹಿಕಾ ಯಾದವ್‌ ಜೋಡಿಯನ್ನು 6-0, 6-3 ಅಂತರದಲ್ಲಿ ಮಣಿಸಿ ಪ್ರಶಸ್ತಿ ಗೆದ್ದುಕೊಂಡರು.

ಸಿಂಗಲ್ಸ್‌ನಲ್ಲಿ ಪ್ರಾಂಜಲಾ ಎಡ್ಲಪಳ್ಳಿ ಮತ್ತು ಸೌಜನ್ಯ ಬಾವಿಸೆಟ್ಟಿ ಅವರು ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಸೆಮಿಫೈನಲ್‌ನಲ್ಲಿ ಸೌಜನ್ಯ ತನ್ನ ಡಬಲ್ಸ್‌ ಜತೆಗಾತಿ ರುತುಜಾ ಭೋಸ್ಲೆ ವಿರುದ್ಧ  ಮೊದಲ ಸೆಟ್‌ನಲ್ಲಿ ಹಿನ್ನಡೆ ಕಂಡರೂ ದಿಟ್ಟ ಹೋರಾಟ ನೀಡಿ 4-6, 6-4, 6-2 ಅಂತರದಲ್ಲಿ ಜಯ ಗಳಿಸಿ ಫೈನಲ್‌ ಪ್ರವೇಶಿಸಿದರು.

ದಿನದ ಎರಡನೇ ಸೆಮಿಫೈನಲ್‌ನಲ್ಲಿ ಪ್ರಾಂಜಲಾ ಎಡ್ಲಪಳ್ಳಿ ಕ್ವಾಲಿಫಯರ್‌ ಶ್ರಿವಳ್ಳಿ ರಶ್ಮಿಕಾ ವಿರುದ್ಧ 3-6, 6-3, 7-5 ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿ ಸುತ್ತು ತಲುಪಿದರು.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.