Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ನಾಳೆ ಬೆಂಗಳೂರಿಗೆ ಕಾಮನ್ವೆಲ್ತ್‌ ಬ್ಯಾಟನ್‌

Sportsmail:          

ಬರ್ಮಿಂಗ್‌ಹ್ಯಾಮ್‌ನಲ್ಲಿ  ಜುಲೈ 28ರಿಂದ  ಆಗಸ್ಟ್‌ 8 ರ ವರೆಗೆ ನಡೆಯಲಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದ ಬ್ಯಾಟನ್‌ 14ರಂದು ಬೆಂಗಳೂರಿಗೆ ಆಗಮಿಸಲಿದೆ.

ಅಕ್ಟೋಬರ್‌ 7, 2021ರಂದು ಆರಂಭಗೊಂಡ ಬ್ಯಾಟನ್‌  269 ದಿನಗಳ ಕಾಲ, 90,000 ಮೈಲುಗಳ ಅಂತರ ಚಲಿಸಿ, 72 ಕಾಮನ್ಲೆಲ್ತ್‌ ರಾಷ್ಟ್ರಗಳಲ್ಲಿ ಸಂಚರಿಸಲಿದೆ.

ಜನವರಿ 10 ರಂದು ರಾಜಧಾನಿ ದಿಲ್ಲಿಗೆ ಆಗಮಿಸಿದ ಬ್ಯಾಟನ್‌ ಅನ್ನು ಭಾರತೀಯ ಒಲಿಂಪಿಕ್ಸ್‌ ಅಸೋಸಿಯೇಷನ್‌ನ ಕ್ವೀನ್‌ ಬ್ಯಾಟಾನ್‌ ರಿಲೇ ಸಮಿತಿಯ ಆಧ್ಯಕ್ಷ ರಾಕೇಶ್‌ ಗುಪ್ತಾ ಬರಮಾಡಿಕೊಂಡರು. ಸಮಿತಿಯ ಸದಸ್ಯರಾದ ಮುಖೇಶ್‌ ಕುಮಾರ್‌, ಹರಿಓಂ ಕೌಶಿಕ್‌, ಭಾರತೀಯ ಟೇಬಲ್‌ ಟೆನಿಸ್‌ ಫೆಡರೇಷನ್ನಿನ ಅಧ್ಯಕ್ಷ ಡಾ. ಪ್ರೇಮ್‌ ವರ್ಮಾ ಮತ್ತು ಡೆಲ್ಲಿ ಒಲಿಂಪಿಕ್ಸ್‌ ಸಂಸ್ಥೆಯ ಅಧ್ಯಕ್ಷ ಕುಲದೀಪ್‌ ವತ್ಸ ಈ ಸಂದರ್ಭದಲ್ಲಿ ಹಾಜರಿದ್ದರು.

ಬಾಂಗ್ಲಾದೇಶದಿಂದ ಆಗಮಿಸಿ ಬ್ಯಾಟನ್‌, 12 ರಂದು ದೆಹಲಿಯಲ್ಲಿ ಸಂಚರಿಸಿ, ನಂತರ 13 ರಂದು ಅಹಮದಾಬಾದ್‌ ತಲುಪಿದೆ. ಅಹಮದಾಬಾದ್‌ನಿಂದ 14ರಂದು ಬೆಂಗಳೂರಿಗೆ ಆಗಮಿಸಿ, 15ಕ್ಕೆ ಭುವನೇಶ್ವರ ತಲುಪಲಿದೆ. ಅಹಮದಾಬಾದ್‌ನಲ್ಲಿ ಕೋವಿಡ್‌ ಕಾರಣ ಅಲ್ಲಿ ರಿಲೇಯನ್ನು ರದ್ದುಗೊಳಿಸಲಾಗಿದ್ದು, ಬಾಕಿ ಎಲ್ಲ ನಗರಗಳಲ್ಲಿ ರಿಲೇ ನಡೆಯಲಿದೆ. 16ರಂದು ಬ್ಯಾಟನ್‌ ಸಿಂಗಾಪುರಕ್ಕೆ ತರಳಲಿದೆ.

ಬೆಂಗಳೂರಿನಲ್ಲಿ ಕ್ರೀಡಾ ಸಚಿವ ಡಾ, ನಾರಾಯಣ ಗೌಡ, ರಾಜ್ಯ ಒಲಿಂಪಿಕ್ಸ್‌ ಸಂಸ್ಥೆಯ ಪದಾಧಿಕಾರಿಗಳು, ಹಾಲಿ ಮತ್ತು ಮಾಜಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಬ್ಯಾಟನ್‌ ರಿಲೇಗೆ ಗೌರವ ಸೂಚಿಸುವರು.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.